ಆತಂಕ

ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ
ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು!

ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ
ಕಿರುಕುಳದ ಭಾರವನು ತಿರುಗುತಿವೆ ಮೋಡಾ.
ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು
ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ.
ಬಿಳಿ ಮೋಡಗಳನುಟ್ಟು ಕಳೆದಿಟ್ಟು ಮತ್ತುಟ್ಟು
ತಿಳಿಯದೆಲೆ ನಿಜಮನವ ಸಿಲೆಯಾಗಿ ನಿಲುತ
ನೀರಗನ್ನಡಿಯಲ್ಲಿ ನೀಳದೇಹವ ನೋಡಿ
ಭಾಳನಾಚುವಳಾಕೆ ಶೈಲಸುತೆಯಾಕೆ.
ಚಿಗುರಿಲ್ಲ ಸೊಬಗಿಲ್ಲ ಮಘಮಗಿಪ ಪೂನಿಲ್ಲ
ಬಿಗಿ ಮೊಗದ ಬಂಜೆಯಿದು ನಗಲಿಲ್ಲ ಹೃದಯ!
ಅರಳುವಾತಾವರೆಯ ಹರಿಯುವಾ ನೀರುಗಳ
ಹರಿಸೋಡಿ ಚಿಗಿಯುವರ ಪರುಕಿಸಲೆ ಇಲ್ಲ!
ಕೆಲಸದೀ ಸುಳಿಯಲ್ಲಿ ಸಿಲುಕಿ ಬನ್ನಣಬಟ್ಟೆ.
ಸಲೆಜೀವದುಸಿರಿಲ್ಲ ಕೊಲುತಿಹುದು ಕೆಲಸ!
ಬಿಟ್ಟಿಹಿಡಿದೆನ್ನತಾ ಮಟ್ಟಿ ಹಿಂಡುತಲಿಹುದು
ಕೆಟ್ಟಹಟದೀಜನದ ಭ್ರಷ್ಟತರ ಕೆಲಸ,
ಹೊಟ್ಟೆಗೀ ಜಾಳಿಗೆಯು ಬಟ್ಟೆಗೀ ಯೂಳಿಗವು
ಕೆಟ್ಟೆ ಕೆಟ್ಟೆನು ನಾನು ಸೃಷ್ಟಿ ದೃಷ್ಟಿಯಲ್ಲಿ.

ಕವಿದಿಹುದು ಬಲು ತಮವು ರವವಿಲ್ಲ ಹೊಳಹಿಲ್ಲ!
ಶಿವನೊಡನೆ ನಿಲಲಿಲ್ಲ ಕವಿಯಾಗಲಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೪
Next post ನವಿಲುಗರಿ – ೭

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys